ವಿಜಯನಗರ…ಹೊಸಪೇಟೆ ನಗರದಲ್ಲಿ ಹುಚ್ಚು ಕೋತಿಯ ಹಾವಳಿಗೆ ಜನ ಹತ್ತುತ್ತರಿಸಿ ಹೋಗಿದ್ದಾರೆ. ಕಳೆದ ಒಂದು ವಾರದಿಂದ ಹತ್ತಕ್ಕೂ ಹೆಚ್ಚು ಜನಗಳ ಮೇಲೆ ದಾಳಿ ನಡೆಸಿರುವ ಹುಚ್ಚು ಕೋತಿ, ಜನಸಾಮಾನ್ಯರಲಿ ಆತಂಕ ಹೆಚ್ಚಿಸಿದೆ.
![](https://hampimirror.com/media/2023/06/Screenshot_2023-06-05-16-32-30-90_99c04817c0de5652397fc8b56c3b3817-1024x565.jpg)
![](https://hampimirror.com/media/2023/06/IMG-20230605-WA0000-579x1024.jpg)
ರಾತ್ರಿ ಹೊತ್ತು ಜನಗಳ ಮೇಲೆ ದಾಳಿ ನಡೆಸುವ ಈ ಹುಚ್ಚು ಕೋತಿ, ಮನೆಯಿಂದ ಆಚೆ ಮಲಗಿದವರನ್ನು ಹೆಚ್ಚು ಟಾರ್ಗೆಟ್ ಮಾಡುತ್ತಿದೆ. ಹೊಸಪೇಟೆಯ ಈಶ್ವರ ನಗರ, ಕಂಚಗಾರ ಪೇಟೆ, ಆಕಾಶವಾಣಿ ಪ್ರದೇಶದಲ್ಲಿ ಸಂಚರಿಸುವ ಈ ಕೋತಿ, ಕಂಡ ಕಂಡವರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದೆ.
![](https://hampimirror.com/media/2023/06/IMG-20230605-WA0006-484x1024.jpg)
ಗಾಯಾಳುಗಳು ಹೊಸಪೇಟೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳುತ್ತಿದ್ದಾರೆ. ಕೋತಿಯ ಹಾವಳಿಗೆ ಬೆಚ್ಚಿ ಬಿದ್ದಿರುವ ಈ ಪ್ರದೇಶದ ಜನಸಾಮಾನ್ಯರು,ಕೋತಿಯನ್ನು ಆದಷ್ಟು ಬೇಗ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ.
![](https://hampimirror.com/media/2023/06/IMG-20230605-WA0003-1024x484.jpg)
ಇತ್ತ ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಹೊಸಪೇಟೆ ನಗರದ ಸರ್ಕಾರಿ 100 ಹಾಸಿಗೆ ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದು ಕೂಡ ಜನಸಾಮಾನ್ಯರು ಆರೋಪಿಸಿದ್ದಾರೆ.. ಕೋತಿ ಕಡಿತಕ್ಕೆ ಕೊಡಲಾಗುವ ಚುಚ್ಚುಮದ್ದು ಅಂದಾಜು 2,000ಕ್ಕೂ ಹೆಚ್ಚು ಬೆಲೆಯ ಔಷಧಿಯಾಗಿದ್ದು, ಹೊಸಪೇಟೆಯ ಈ ಸರ್ಕಾರಿ ಆಸ್ಪತ್ರೆಯಲ್ಲಿ ಈ ಔಷಧೀಯ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಲಾಗಿದೆ,
![](https://hampimirror.com/media/2023/06/IMG-20230605-WA0004-484x1024.jpg)
ಹಾಗಾಗಿ ಈ ಇಲ್ಲಿನ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ಕೋತಿಯನ್ನು ಸೆರೆ ಹಿಡಿಯುವುದರ ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಯನ್ನು ಒದಗಿಸಬೇಕೆಂದು ಸಾಮಾಜಿಕ ಹೋರಾಟಗಾರ ಸಂತೋಷ್ ಕಲ್ಮಠ ಒತ್ತಾಯಿಸಿದ್ದಾರೆ.
ವರದಿ:ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ..