You are currently viewing ಟ್ಯಾಕ್ಸಿ ಚಾಲಕರಿಂದ ಬಡ ಬಗ್ಗರಿಗೆ ಗಂಜಿ ವಿತರಣೆ.

ಟ್ಯಾಕ್ಸಿ ಚಾಲಕರಿಂದ ಬಡ ಬಗ್ಗರಿಗೆ ಗಂಜಿ ವಿತರಣೆ.

ವಿಜಯನಗರ.ಹೊಸಪೇಟೆಯ ಭಾರತ್ ಟ್ಯಾಕ್ಸಿ ಚಾಲಕರ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 812ನೇ ವರ್ಷದ ಅಜ್ಮಿರ್ ಖಾಜಾ ಗರೀಬ್ ನವಾಜ್ ಉರುಸ್ ಹಿನ್ನೆಲೆಯಲ್ಲಿ ಬಡ ಬಗ್ಗರಿಗೆ ಗಂಜಿ ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಭಾಷ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಸರ್ವ ಸದಸ್ಯರು ಭಾಗಿಯಾಗಿ ಗಂಜಿಯನ್ನ ತಯಾರಿಸಿ ವಿತರಣೆ ಮಾಡಿದರು.

70ಲೀಟರ್ ಹಾಲು. 15ಕೇಜಿ ಬಾಂಬೆ ರವೆ. 1ಕೇಜಿ ಬದಾಮ್ 1ಕೇಜಿ ಗೋಡಂಬಿ. 6ಕೇಜಿ ಸೇಬು. 4ಕೇಜಿ ದಾಳಿಂಬೆ. 150ಬಾಳೆ ಹಣ್ಣು, 3ಕೇಜಿ ದ್ರಾಕ್ಷಿಯೊಂದಿಗೆ 15ಕೇಜಿ ಸಾಕ್ಕರೆ ಬೆರಸಿ ಮಾಡಿದ ಗಂಜಿಯನ್ನ ತಯಾರಿಸಿ

ಹೊಸಪೇಟೆ ನಗರದ ಶ್ರೀ ರಾಮುಲು ಪಾರ್ಕ್ ಮುಂಬಗದ ಟ್ಯಾಕ್ಸಿ ನಿಲ್ದಾಣದಲ್ಲಿ ಗಂಜಿ ವಿತರಿಸಲಾಯಿತು.