You are currently viewing ಶಿಕ್ಷಣದಿಂದ ಮಾತ್ರ ಪ್ರಗತಿ ಸಾದ್ಯ<br>-ಚೇತನ್ ಅಹಿಂಸಾ

ಶಿಕ್ಷಣದಿಂದ ಮಾತ್ರ ಪ್ರಗತಿ ಸಾದ್ಯ
-ಚೇತನ್ ಅಹಿಂಸಾ

ವಿಜಯನಗರ: ಸಾಮಾಜಿಕ ಮತ್ತು ಅರ್ಥಿಕ ಅಭಿವೃದ್ಧಿಯಾದರೆ ದೇಶ ವಿಶ್ವಗುರು ಆಗಲಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾದ್ಯ. ಹಾಗಾಗಿ ತಳ ಸಮುದಾಯದ ಮಕ್ಕಳು ಶಿಕ್ಷಣ ಪಡೆಯಬೇಕು ಎಂದು ಚಿತ್ರನಟ ಚೇತನ್ ಅಹಿಂಸಾ ಹೇಳಿದರು.

ಹರಪನಹಳ್ಳಿ ತಾಲೂಕು ಶಾಂತಿನಗರ ತಾಂಡಕ್ಕೆ ನ್ಯಾಯವಾದಿ ಎನ್ ಅನಂತನಾಯಕ್ ಅವರ ಮನೆಗೆ ಸೌಹಾರ್ದ ಭೇಟಿ ಸಮಯದಲ್ಲಿ ತಾಂಡದ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.

ತಾಂಡಗಳು, ಅಲೆಮಾರಿಗಳ ಹಟ್ಟಿ ಹಾಡಿಗಳಿಗಳು ಮೂಲಭೂತ ಸೌಲಭ್ಯಗಳನ್ನು ಪಡೆಯಬೇಕು. ಯುವಕರು ಶಿಕ್ಷಣ, ಉದ್ಯೋಗ ಪಡೆಯಬೇಕು. ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ಅವರ ವಿಚಾರಗಳನ್ನು ಓದಬೇಕು. ಅವರಂತೆ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ತನುಜಾ ಅಧ್ಯಕ್ಷತೆ ವಹಿಸಿದ್ದರು.

ಯುವ ಮುಖಂಡರಾದ ಪ್ರಕಾಶ್ ವ್ಯಾಸನ ತಾಂಡ, ರುದ್ರೇಶ್ ನಾಯ್ಕ, ಪರಶುರಾಮ ದುಗ್ಗತ್ತಿ, ಮಂಜುನಾಥ, ಇತರರು ಇದ್ದರು.