![](https://hampimirror.com/media/2022/01/image_editor_output_image-1293363769-1642922690665.jpg)
ವಿಜಯನಗರ…ಹೌದು ಅಕ್ರಮವಾಗಿ ಸಾಗಿಸುತಿದ್ದ ಪಡಿತರ ಅಕ್ಕಿಯನ್ನ ವಶಪಡಿಸಿಕೊಳ್ಳುವಲ್ಲಿ ಗುಡೇಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ, 3.11 ಲಕ್ಷ ಮೌಲ್ಯದ 11ಟನ್ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೊಲೀಸರು ಲಾರಿ ಚಾಲಕ ಆದಿಲ್ ಭಾಷ್ ನನ್ನ ಬಂದಿಸಿದ್ದಾರೆ,ಇನ್ನು ತಲೆ ಮರಿಸಿಕೊಂಡೊರುವ ಇನ್ನೊಬ್ನ ಆರೋಪಿಯ ಸುರೇಶ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.
![](https://hampimirror.com/media/2022/01/IMG-20220123-WA0102-768x1024.jpg)
ಕುಡೇಕೋಟೆ ಗ್ರಾಮದ ಬಳಿಯ ಹಾನಗಲ್ ಕ್ರಾಸಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟಮಾಡುವ ಖಚಿತ ಮಾಹಿತಿ ತಿಳಿದ ಗುಡೇಕೋಟಿ ಪೊಲೀಸ್ ಠಾಣೆಯ ಪಿ.ಎಸ್.ಐ. ಮಾಲೀಕ್ ಸಾಬ ಕಲಾರಿ ಮತ್ತು ಕೂಡ್ಲಿಗಿ ಆಹಾರ ನಿರೀಕ್ಷಕ ಗೀತಾಂಜನೇಯ ಕೆ.ಎ.17ಎ 7677 ನಂಬರಿನ ಈಚರ್ ಲಾರಿಯನ್ನ ತಡೆದು ಪರಿಸೀಲನೆ ನಡೆಸಿದ್ದಾರೆ.
![](https://hampimirror.com/media/2022/01/IMG-20220123-WA0103-1024x768.jpg)
ಲಾರಿಯಲ್ಲಿ 50ಕೆಜಿ ತೂಕದ 240 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು ಕೂಡಲೆ ಲಾರಿಯನ್ನ ಠಾಣೆಗೆ ತಂದು ಪ್ರಕರಣ ದಾಖಲಿಸಿದ್ದಾರೆ. ಇನ್ನು ಸಿಬ್ಬಂದಿಗಳ ಕಾರ್ಯವೈಖರಿಯನ್ನ ಮೆಚ್ಚಿರುವ ವಿಜಯನಗರ ಎಸ್ಪಿ.ಡಾಕ್ಟರ್ ಕೆ.ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ಹೆಚ್ಚಾಗುತಿದ್ದು, ಪೊಲೀಸರು ಪ್ರಕರಣ ಭೇದಿಸಿರುವುದನ್ನ ಮೆಚ್ಚಲೇಬೇಕು.
ವರದಿ..ಸುಬಾನಿ ಪಿಂಜಾರ ವಿಜಯನಗರ.