![](https://hampimirror.com/media/2022/02/IMG_20220211_151233-569x1024.jpg)
ವಿಜಯನಗರ…ಪುನೀತ್ ರಾಜಕುಮಾರ ಅಭಿನಯದ ಜೇಮ್ಸ್ ಟೀಸರ್ ನೋಡಿದ ಅಭಿಮಾನಿಯೊಬ್ಬ ಎದೆ ಮೇಲೆ ಚಾಕುವಿನಿಂದ ಅಪ್ಪು ಎಂದು ಬರೆದುಕೊಂಡು ಸುದ್ದಿಯಾಗಿದ್ದಾನೆ, ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಪಟ್ಟಣದ ಕನಕ ಈರೀತಿಯಾಗಿ ಎದೆ ಕೊಯ್ದುಕೊಂಡಿರುವ ಅಂದ ಅಭಿಮಾನಿಯಾಗಿದ್ದಾನೆ.
ಹೊಸಪೇಟೆಯ ಪುನೀತ್ ರಾಜ್ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಟೀಸರ್ ನೋಡಲು LED ಪರದೇ ವ್ಯವಸ್ಥೆಯನ್ನ ಕೂಡ ಮಾಡಲಾಗಿತ್ತು, ಈ ಸ್ಥಳಕ್ಕೆ ಬಂದ ಕನಕ ಟೀಸರ್ ನೋಡಿದ ಬಳಿಕ ಭಾವೋದ್ವೇಗಕ್ಕೆ ಒಳಗಾಗಿ, ತನ್ನ ಎದೆಯ ಮೇಲೆ ಅಪ್ಪು ಎಂದು ಚಾಕುವಿನಿಂದ ಬರೆದುಕೊಂಡಿದ್ದಾನೆ.
![](https://hampimirror.com/media/2022/02/IMG-20220211-WA0192-576x1024.jpg)
![](https://hampimirror.com/media/2022/02/IMG_20220211_151210-569x1024.jpg)
ಹೊಸಪೇಟೆ ನಗರದ ಮೇಲೆ ಪುನಿತ್ ರಾಜ್ ಕುಮಾರ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ಈ ಕಾರಣಕ್ಕೆ ಹೊಸಪೇಟೆ ನಗರದಲ್ಲಿ ಅಪ್ಪು ಅಭಿಮಾನದ ದೊಡ್ಡ ಬಳಗವೇ ಇದೆ.ಉತ್ತರ ಕರ್ನಾಟಕ ಬಾಗಕ್ಕೆ ಬಂದರೆ ಹೊಸಪೇಟೆ ನಗರದ ಅವರ ಅಭಿಮಾನಿಗಳ ಮನೆಗೆ ಬೇಟಿ ನೀಟಿ ಮಾಂಸದೂಟ ಸವಿದು ಹೋಗುತಿದ್ದರು ಅಪ್ಪು.
ಅದಲ್ಲದೆ ಇತ್ತೀಚೆಗೆ ಅಪ್ಪು ಮರಣದ ನಂತರ ಅತೀ ಹೆಚ್ಚು ನೋವುಂಡ ಅಭಿಮಾನಿಗಳು ಎಂದರೆ ಅದು ಹೊಸಪೇಟೆ ನಗರದ ಅಭಿಮಾನಿಗಳು,ಹಾಗಾಗಿ ಇಂತಾ ಅಂದ ಅಭಿಮಾನಿಗಳು ಕೂಡ ಅಲ್ಲಲ್ಲಿ ಕಾಣ ಸಿಗುತ್ತಾರೆ. ಎದೆ ಕೋಯ್ದುಕೊಂಡ ಕನಕ ಅವರ ಆರೋಗ್ಯ ಚನ್ನಾಗಿದ್ದು ಸ್ಥಳೀಯ ಆಸ್ಪತ್ರೆಗೆ ಬೇಟಿ ನೀಡಿ ಪ್ರಾಥಮಿಕ ಚಿಕಿತ್ಸೆ ಪಡೆದು ಮರಿಯಮ್ಮನಹಳ್ಳಿಯ ತನ್ನ ಮನೆಗೆ ಹಿಂದಿರುಗಿದ್ದಾನೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.