You are currently viewing ದೇವರಿಗೆ ಪೂಜೆ ಸಲ್ಲಿಸುವ ಹಕ್ಕಿಗಾಗಿ ಅರ್ಚಕರ ಫೈಟ್.

ದೇವರಿಗೆ ಪೂಜೆ ಸಲ್ಲಿಸುವ ಹಕ್ಕಿಗಾಗಿ ಅರ್ಚಕರ ಫೈಟ್.

ಹಾವೇರಿ ಜಿಲ್ಲೆ…. ಪೂಜೆ ಸಲ್ಲಿಸುವ ಸಂಭಂದ ಅರ್ಚಕರು ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಇತಿಹಾಸ ಪ್ರಸಿದ್ದ ದೇವರಗುಡ್ಡದ ಮಾಲತೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನಡೆದಿದೆ,ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಈ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಗೂರುಜಿ ಹಾಗೂ ದೇವಸ್ಥಾನದ ಪರಿಚಾರಕರಾಗಿರುವ ಶಿವಪ್ಪ ಉಪ್ಪಾರ, ಮೃತ್ಯುಂಜಯ ನಡುವೆ ತೀವ್ರವಾಗಿ ಮಾತಿನ ಚಕಮಕಿ ನಡೆದು, ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿ ಜಗಳವಾಡಿಕೊಂಡಿದ್ದಾರೆ.

ಬೆಳ್ಳಂಬೆಳಗ್ಗೆ ದೇವರ ಮೊದಲ ಪೂಜೆಗಾಗಿ ತೆರಳಿದ ಸಂದರ್ಭದ ವೇಳೆಯಲ್ಲಿ ಈ ಘಟನೆ ನಡೆದಿದ್ದು ದೇಸ್ಥಾನದಲ್ಲಿದ್ದ ಮಹಿಳೆಯರು ಅರ್ಚಕರ ಜಗಳ ತಡೆಯಲು ಮುಂದಾಗಿದ್ದಾರೆ, ಈ ದೃಶ್ಯ ಸಿಸಿ ಟಿವಿಯ ಕ್ಯಾಮರದಲ್ಲಿ ಸೆರೆಯಾಗಿದೆ.

ಘಟನೆಯ ಸಂಭಂದ ರಾಣೆಬೇನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

ಇನ್ನು ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಹಕ್ಕಿಗಾಗಿ ತಲೆದೂರಿರುವ ವಿವಾದ ನಿನ್ನೆ ಮೊನ್ನೆಯದಲ್ಲಿ ಹಲವು ವರ್ಷಗಳಿಂದ ಮುಂದುವರೆದುಕೊಂಡು ಬಂದಿದ್ದು, ಇದೀಗ ಸಿ.ಸಿ.ಟಿ.ವಿ.ಕ್ಯಾಮರ ಮೂಲಕ ಸತ್ಯ ಬಯಲಾಗಿದೆ. ದೇವಸ್ಥಾನದ ಗರ್ಭದ ಗುಡಿಯಲ್ಲೇ ಈ ರೀತಿಯಾಗಿ ಬಡಿದಾಡಿಕೊಂಡಿರುವುದು ಮಾಲತೇಶ್ವರನ ಭಕ್ತ ಸಮೂಹಕ್ಕೆ ತೀರ್ವ ಬೇಸರ ಉಂಟಾಗಿದೆ.

ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಷ್ಟ್ರ, ಆಂದ್ರಪ್ರದೇಶ, ತೆಲಾಂಗಣ ರಾಜ್ಯಗಳಲ್ಲಿ ಅಪಾರ ಸಂಖೆಯ ಭಕ್ತ ಸಮೂಹವನ್ನ ಹೊಂದಿರುವ ಈ ದೇವಸ್ಥಾನದಲ್ಲಿ ಈ ರೀತಿಯಾಗಿ ನಡೆಯಬಾರದು ಎನ್ನುವ ಅಭಿಪ್ರಾಯವನ್ನ ಭಕ್ತರು ವ್ಯಕ್ತಪಡಿಸಿದ್ದಾರೆ.

ವರದಿ..
ಸುಬಾನಿ ಪಿಂಜಾರ. ವಿಜಯನಗರ.