You are currently viewing ಯುವತಿಯ ಕತ್ತು ಸೀಳಿ ನೆತ್ತರು ಹರಿಸಿದ ಪಾಪಿ. ಶಿರದ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಾಣದ ವಿಕೃತ ವ್ಯಕ್ತಿ.

ಯುವತಿಯ ಕತ್ತು ಸೀಳಿ ನೆತ್ತರು ಹರಿಸಿದ ಪಾಪಿ. ಶಿರದ ಸಮೇತ ಪೊಲೀಸ್ ಠಾಣೆಗೆ ಹೋಗಿ ಶರಾಣದ ವಿಕೃತ ವ್ಯಕ್ತಿ.

ವಿಜಯನಗರ..ಪ್ರೀತಿಸಿದ ಯುವತಿಯ ಶಿರವನ್ನ ಕತ್ತರಿಸಿದ ವಿಕೃತ ಯುವಕನೊಬ್ಬ ಶಿರವನ್ನ ಕೈಯಲ್ಲಿ ಹಿಡಿದೇ ಪೊಲೀಸರಿಗೆ ಶರಣಾದ ಭಯಾನಕ ಘಟನೆಯೊಂದು ವಿಜಯನಗರ ಜಿಲ್ಲೆ ಕೂಡ್ಲೀಗಿ ತಾಲೂಕಿನ ಖಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ‌ಯ ಕನ್ನಬೋರಯ್ಯನ ಹಟ್ಟಿಯಲ್ಲಿ ಇಂದು‌ ಮದ್ಯಾಹ್ನ  ನಡೆದಿದೆ.

ನಿರ್ಮಲ 23ವರ್ಷ ಕೊಲೆಯಾಗಿರುವ ಯುವತಿಯಾಗಿದ್ದು, ಬೋಜರಾಜ ಕೊಲೆಮಾಡಿ ಪಾತಕಿಯಾಗಿದ್ದಾನೆ. ಬಿ.ಎಸ್.ಸಿ.ನರ್ಸಿಂಗ್ ಓದುತಿದ್ದ ಯುವತಿ ನಿರ್ಮಲ ರಜೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಮನೆಗೆ ಬಂದಿದ್ದಳು, ನಿರ್ಮಲ ಒಬ್ಬಳೇ ಮನೆಯಲ್ಲಿರುವ ವಿಷಯ ತಿಳಿದ ಭೋಜರಾಜ್ ಮನೆಗೆ ನುಗ್ಗಿ ಮಚ್ಚಿನಿಂದ ಯುವತಿಯನ್ನ ಬರ್ಭರವಾಗಿ ಹತ್ತ್ಯೆಮಾಡಿದ್ದಾನೆ. ಅದಲ್ಲದೆ ಕತ್ತರಿಸಿದ ಯುವತಿಯ ಶಿರವನ್ನ ಮೊಟರ್ ಬೈಕ್ ಸೈಡ್ ಬ್ಯಾಗಲ್ಲಿ ಇಟ್ಟುಕೊಂಡು ಖಾನ ಹೊಸಹಳ್ಳಿ  ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇನ್ನು ವಿಷಯ ತಿಳಿದ ಖಾನ ಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ಬೇಟಿ ಬೀಡಿ ಪರಿಸೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಇನ್ನು ಒಂದು ಮಾಹಿತಿ ಪ್ರಕಾರ ಭೋಜರಾಜ  ಈ ಯುವತಿಯನ್ನ ಮೊದಲಿನಿಂದಲೂ ಪ್ರೀತಿಸುತಿದ್ದನಂತೆ, ಆದರೆ ಇತ್ತೀಚೆಗೆ ಅಂದರೆ ಮೂರು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಭೋಜರಾಜನ ಮದುವೆ ಮಾಡಿದ್ದರಂತೆ ಮನೆಯ ಹಿರಿಯರು, ತಾನು ಬೇರೆ ಯುವತಿಯೊಂದಿಗೆ ಮದುವೆ ಆಗಿದ್ದರೂ ಈ ಯುವತಿಯನ್ನ ಯಾಕೆ ಕೊಲೆಮಾಡಿದ್ದಾನೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇತ್ತ ಮಗಳನ್ನ ಕಳೆದು ಕೊಂಡ ನಿರ್ಮಲ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿದೆ.

ತಾವು ಗುಡಿಸಲಿನಲ್ಲಿ ವಾಸಿಸುತಿದ್ದರೂ ಮಗಳನ್ನ ಬಿ.ಎಸ್.ಸಿ. ನರ್ಸಿಂಗ್ ಓದಿಸಿ ಮಗಳ ಭವಿಷ್ಯವನ್ನ ರೂಪಿಸಲು ಶ್ರಮ ಪಡುತಿದ್ದರು ನಿರ್ಮಲ ಪೊಷಕರು, ಅಂತಾ ಪರಿಸ್ಥಿತಿಯಲ್ಲಿ ಚಿನ್ನದಂತ ಮಗಳನ್ನ ಹೀಗೆ ವಿಕೃತವಾಗಿ ಕೊಚ್ಚಿ ಕೊಲೆಮಾಡಿದ್ದಾನೆ ಈ ಪಾಪಿ ಎಂದು ತಮ್ಮ ಆಕ್ರೋಶದ ಆಕ್ರಂದನವನ್ನ ಹೊರ ಹಾಕಿದ್ದಾರೆ ನಿರ್ಮಲ ಸಂಭಂದಿಕರು.