You are currently viewing ನೂತನ ವಿಜಯನಗರ ಜಿಲ್ಲೆಯಲ್ಲಿ ಶಿಕ್ಷಕರ ಸಂಘದ ಮೊದಲ ಕಾರ್ಯಕಾರಿಣಿ ಸಭೆ.

ನೂತನ ವಿಜಯನಗರ ಜಿಲ್ಲೆಯಲ್ಲಿ ಶಿಕ್ಷಕರ ಸಂಘದ ಮೊದಲ ಕಾರ್ಯಕಾರಿಣಿ ಸಭೆ.

ವಿಜಯನಗರ…(ಹೊಸಪೇಟೆ)ದಿನಾಂಕ 28/ 09 /2022 ರ ಬುಧವಾರ ಮಧ್ಯಾಹ್ನ ವಿಜಯನಗರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮೊದಲ ಕಾರ್ಯಕಾರಣಿ ಸಭೆ ಮಹಿಳಾ ಸಮಾಜ ಶಾಲೆ ಹೊಸಪೇಟೆಯಲ್ಲಿ ಅಧ್ಯಕ್ಷರಾದ ಶ್ರೀಯುತ ಮನೋಹರ್ ಏನ್ ಜಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು .
, ಜಿಲ್ಲಾ ಉಪಾಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ರವರು ಎಲ್ಲರನ್ನ ಸ್ವಾಗತಿಸಿದರು , ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘದ ಕಾರ್ಯದರ್ಶಿಗಳಾದ ಶ್ರೀಯುತ ಕುಮಾರಸ್ವಾಮಿಯವರು ಪ್ರಥಮ ಕಾರ್ಯಕಾರಿಣಿಯಲ್ಲಿ ಇರುವಂತಹ ಅಜೆಂಡಗಳ ವಿವರಣೆಯನ್ನು ನೀಡಿದರು.
ನಂತರ ಎಲ್ಲಾ ತಾಲೂಕುಗಳಿಂದ ಆಗಮಿಸಿದ ಪದಾಧಿಕಾರಿಗಳನ್ನು ಹಾಗೂ ಜಿಲ್ಲಾ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.


ತದನಂತರದಲ್ಲಿ ಎಲ್ಲಾ ತಾಲೂಕುಗಳಿಂದ ಆಗಮಿಸಿದ ತಾಲೂಕ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳ ಕುರಿತಾಗಿ ಮನವಿ ಪತ್ರಗಳನ್ನ ಮಂಡನೆ ಮಾಡಿ ಜಿಲ್ಲಾಧ್ಯಕ್ಷರ ಮೂಲಕ ರಾಜ್ಯಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಲಾಯಿತು ,
ಸಂಘದ ಸಹ ಕಾರ್ಯದರ್ಶಿ ಶಿವಕುಮಾರ್ ಗಡ್ಡಿ ಅವರು ಕಳೆದ ಎರಡು ತಿಂಗಳಿಂದ ಜಿಲ್ಲಾ ಸಂಘ ಕೈಗೊಂಡ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು,


ನಂತರ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಯುತ ಮನೋಹರ್ ಎನ್ ಜಿ ಅವರು ಮಾತನಾಡಿ ಶಿಕ್ಷಕರ ಸಮಸ್ಯೆಗಳ ಕುರಿತು ಅವುಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಘ ಯಾವತ್ತೂ ಕಟ್ಟಿಬದ್ಧವಾಗಿರುತ್ತದೆ ಎಂದರು, ಅನುದಾನಿತ ಶಾಲಾ ಶಿಕ್ಷಕರ ವೇತನ ವಿಳಂಬದ ಸಮಸ್ಯೆ,
TGT ಶಿಕ್ಷಕರ ಮರು ಹೊಂದಾಣಿಕೆ ,
ಬಡ್ತಿ ಶಿಕ್ಷಕರ 10 ,15 ,20 ,25 ವರ್ಷಗಳ ಕಾಲಮಿತಿ ವೇತನ ಬಡ್ತಿ ಮಾಡಿಸುವಿಕೆ,
NPS ರದ್ದತಿ, 7ನೇ ವೇತನ ಆಯೋಗ ,ತಾಲೂಕ ಹಂತದಲ್ಲಿ ಸದಸ್ಯತ್ವ ನೊಂದಣಿ ಅಭಿಯಾನ
ಹೀಗೆ ಹಲವಾರು ಕಾರ್ಯಗಳ ಕುರಿತು ಜಿಲ್ಲಾ ಸಂಘದ ಪ್ರಯತ್ನ ವಿವರಿಸಿದರು,.


ಇದೇ ಸಂದರ್ಭದಲ್ಲಿ ಜಿಲ್ಲಾ ಸಂಘದ ಗೌರವಾಧ್ಯಕ್ಷರಾಗಿ ಶ್ರೀಯುತ ಶಿವರಾಜ್ ಪಿ ಇವರನ್ನು ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ಕೊನೆಗೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀಯುತ ಬಿ ಗುರುಮೂರ್ತಿಯವರು ಸರ್ವರಿಗೂ ವಂದನೆಗಳನ್ನು ತಿಳಿಸಿದರು
,,