You are currently viewing ಸೇವಾ ಅವಧಿಯನ್ನ ಪೂರ್ಣಗೊಳಿಸಿ ತವರಿಗೆ ಮರಳುತ್ತಿರುವ ವೀರ ಯೋಧನಿಗೆ ಅದ್ದೂರಿ ಸ್ವಾಗತ.

ಸೇವಾ ಅವಧಿಯನ್ನ ಪೂರ್ಣಗೊಳಿಸಿ ತವರಿಗೆ ಮರಳುತ್ತಿರುವ ವೀರ ಯೋಧನಿಗೆ ಅದ್ದೂರಿ ಸ್ವಾಗತ.

ಕೊಪ್ಪಳ…ದೇಶ ಸೇವೆಯನ್ನ ಕಳೆದ 22ವರ್ಷಗಳಿಂದ ಮಾಡಿದ ಕೊಪ್ಪಳ ಜಿಲ್ಲೆಯ ಯೋಧ ತಮ್ಮ ಸೇವಾ ಅವದಿಯನ್ನ ಪೂರ್ಣಗೊಳಿಸಿ ನಾಳೆ ತಮ್ಮ ತವರಿಗೆ ಮರಳಲಿದ್ದಾರೆ.

ಕೊಪ್ಪಳ ಜಿಲ್ಲೆಯ ಲಕಮಾಪುರ ಗ್ರಾಮದ   ಬಸವರಾಜ ನಿಂಗಪ್ಪ ಮುದ್ಲಾಪೂರ ಅವರು 2000ನೆ ಇಸವಿಯಲ್ಲಿ ಸೇನೆಗೆ ಸೇರಿದ್ದರು, ತಮ್ಮ ಯಶಸ್ವಿ  22 ವರ್ಷಗಳ ಸೇವೆ ಮುಗಿದ ಹಿನ್ನೆಲೆಯಲ್ಲಿ ಸೇನೆಯಿಂದ ನಿವೃತ್ತಿ ಪಡೆದು ನಾಳೆ ತಮ್ಮ ಸ್ವಗ್ರಾಮ ಲಕಮಾಪುರಕ್ಕೆ ಮರಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಬಸವರಾಜ ಅವರ ಆಗಮನಕ್ಕೆ ಕಾಯುತ್ತಿದೆ, ಸೇನೆಯಲ್ಲಿ ಸೇವೆ ಸಲ್ಲಿಸಿ‌ಮರಳುತ್ತಿರುವ ಬಸವರಾಜ ಅವರಿಗೆ ಅವರು ಕಲಿತ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮವನ್ನ ಆಯೋಜನೆಮಾಡಿ ಗೌರವ ಸಲ್ಲಿಸಲು ಗ್ರಾಮದ ಯುವಕರು ಸಜ್ಜಾಗಿದ್ದಾರೆ.

ವರದಿ. ಸುಬಾನಿ ಪಿಂಜಾರ ಹಂಪಿ ಮಾರ್ಗ ವಿಜಯನಗರ.