You are currently viewing ನಿತ್ತ್ಯ ಕಲಹಕ್ಕೆ ಹರಿಯಿತು ನೆತ್ತರು.

ನಿತ್ತ್ಯ ಕಲಹಕ್ಕೆ ಹರಿಯಿತು ನೆತ್ತರು.

ವಿಜಯನಗರ…..ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಮಾತನ್ನ ಕೇಳಿದ್ದೇವೆ, ಆದರೆ ಇಲ್ಲಿ ನೆತ್ತರ ಹರಿಯುವ ತನಕ ಎಂದು ಆ ನಾಣ್ಣುಡಿ ಬದಲಾಗಿದೆ. ಹೌದು ಕೌಟುಂಬಿಕ ಕಲಹದ ಹಿನ್ನೆಲೆ ಪತಿ ತನ್ನ ಪತ್ನಿಯನ್ನೇ ಮಾರಕ ಅಸ್ತ್ರದಿಂದ ಕೊಲೆ ಮಾಡಿ ತಾನು ಕೂಡ ಕತ್ತು ಸೀಳಿಕೊಂಡು ಆತ್ಮಹತ್ಯಗೆ ಎತ್ನಿಸಿರುವ ಘಟನೆ ವಿಜಯನಗರದ ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಇಂದು ಮದ್ಯಾಹ್ನ ಎರಡು ಗಂಟೆಯ ಸುಮಾರಿಗೆ ನಡೆದಿದೆ.

ನಾಗೇನಹಳ್ಳಿ ಗ್ರಾಮದ ಶಾಂತಮ್ಮ 45 ವರ್ಷ, ಕೊಲೆಯಾದ ಮಹಿಳೆಯಾಗಿದ್ದು, ಸಾಲುಮನಿ ಹೊನ್ನೂರಪ್ಪ 50 ವರ್ಷ ತನ್ನ ಹೆಂಡತಿಯನ್ನ ಕೊಲೆಮಾಡಿ ತಾನು ಕೂಡ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಎತ್ನಿಸಿದ ವ್ಯಕ್ತಿಯಾಗಿದ್ದಾನೆ. ಕತ್ತು ಸೀಳಿಕೊಂಡು ಆತ್ಮ ಹತ್ತ್ಯೆಗೆ ಎತ್ನಿಸಿದ ಹೊನ್ನೂರುಪ್ಪನನ್ನ ಹೊಸಪೇಟೆ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನೂರಪ್ಪನ ಪರಿಸ್ಥಿತಿ ಚಿಂತಾಜನಕವಾಗಿದ್ದು ಬದುಕುಳಿಯುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಇನ್ನು ಘಟನೆಯ ವಿಚಾರ ತಿಳಿಯುತಿದ್ದಂತೆ ಸ್ಥಳಕ್ಕೆ ಬೇಟಿ ನೀಡಿದ ಹೊಸಪೇಟೆ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊಲೆಗೆ ಕಾರಣ….

ಹೆಂಡತಿಯ ಶೀಲ ಶೆಂಕಿಸಿ ನಡೆದಿರುವ ಕೊಲೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಕಳೆದ ಹಲವು ದಿನಗಳಿಂದ ಗಂಡ ಹೆಂಡತಿಯ ಮದ್ಯೆ ಜಗಳ ನಡೆಯುತಿದ್ದು, ಮನೆಯಲ್ಲಿ ಹೊಡೆದಾಟ ಬಡಿದಾಟ ಸರ್ವೇ ಸಾಮಾನ್ಯವಾಗಿತ್ತು, ಇಂದು ಕೂಡ ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದಿದ್ದು, ಹೊನ್ನೂರಪ್ಪ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕೂಡ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಸ್ಥಳದಲ್ಲೇ ಅಸ್ವಸ್ಥನಾಗಿ ಬಿದ್ದಿದ್ದಾನೆ. ಶಾಲೆಗೆ ಹೊದ ಮಕ್ಕಳು‌ ಮನೆಗೆ ಊಟಕ್ಕೆಂದು ಬಂದಾಗ ತಂದೆ ಮತ್ತು ತಾಯಿ ಇಬ್ಬರು ನೆತ್ತರು ಮಡುವಿನಲ್ಲಿ ಬಿದ್ದು ನರಳಾಡುವ ದೃಷ್ಯವನ್ನ ಕಂಡು ಕಂಗಾಲಾಗಿ ನೆರೆ ಹೊರೆಯರಿಗೆ ವಿಷಯ ತಿಳಿಸಿದ್ದಾರೆ.

ನಂತರ ನೆರೆಹೊರೆಯವರು ಹೊಸಪೇಟೆ ಗ್ರಾಮೀಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಅದಾದ ಬಳಿಕ ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ತನಿಖೆ ಕೈಗಿಂಡಿದ್ದಾರೆ. ದುರಂತ ಎಂದರೆ ಹೊನ್ನೂರಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ಮದುವೆಯಾಗಿ ಇಪ್ಪತ್ತು ವರ್ಷಗಳು ಕಳೆದಿವೆ. ಆರು ಜನ ಮಕ್ಕಳು ಇದ್ದು ಅದರಲ್ಲಿ ಇಬ್ಬರು ಮಕ್ಕಳು ಯವೌನಾವಸ್ಥೆಗೆ ಬಂದಿದ್ದಾರೆ. ಹೀಗಿದ್ದರು ಈ ಪತಿ ಪತ್ನಿಯರಿಬ್ಬರು ಒಬ್ಬರಿಗೊಬ್ಬರು ವೈಶಮ್ಯ ಬೆಳಸಿಕೊಂಡು ಕೊಲೆಯಲ್ಲಿ ತಮ್ಮ ದಾಂಪತ್ಯವನ್ನ ಅಂತ್ಯವಾಗಿಸಿಕೊಂಡಿದ್ದಾರೆ.ಇತ್ತ ಆರು ಜನ ಮಕ್ಕಳು ಬೀದಿಪಾಲಾಗಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.