You are currently viewing ಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ರೈತರು ದಾರುಣ ಸಾವು.

ಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ರೈತರು ದಾರುಣ ಸಾವು.

ವಿಜಯನಗರ …ಬುಲೇರೊ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ರೈತರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮಿರಾಕೊರನಹಳ್ಳಿ ಕ್ರಾಸ್ ಬಳಿ ನಡೆದಿದೆ.  ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ಎತ್ತಿನ ಮನಿ ಆನಂದಪ್ಪ( 60)ಮತ್ತು ಕಾರ್ಲಿ ವೀರಪ್ಪ(58) ಅಪಘಾತದಲ್ಲಿ ಸಾವನ್ನಪ್ಪಿದ ರೈತರಾಗಿದ್ದು ಮೃತ ಕುಟುಂಭಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಗೆ ಸಂಭಂದಿಸಿದಂತೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೂವಿನಹಡಗಲಿ ಕಡೆಯಿಂದ ಮಾನ್ಯರ ಮಸಲವಾಡ ಗ್ರಾಮಕ್ಕೆ ಹೊರಟಿದ್ದ ಬೈಕ್ ಮತ್ತು ಹರಪನಹಳ್ಳಿ ಕಡೆಯಿಂದ ಹೂವಿನಹಡಗಲಿ ಕಡೆ ಹೊರಟಿದ್ದ ಬುಲೇರೊ ಪಿಕಪ್ ನಡುವೆ ಅಪಘಾತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಹೂವಿನಹಡಗಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನು ಘಟನೆ ನಡೆಯುತಿದ್ದಂತೆ ಕಾರ್ಲಿ ವೀರಪ್ಪ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಬೀರ ಗಾಯಗೊಂಡ ಎತ್ತಿನ ಮನಿ ಆನಂದಪ್ಪನವರನ್ನ ಹೂವಿನಹಡಗಲಿ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲು ಮುಂದಾಗಿದ್ದಾರೆ ಸ್ಥಳೀಯರು, ವೈಧ್ಯರ ಸಿಪಾರಸ್ಸಿನ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಕೊಡಿಸಲು ಮುಂದಾಗಿದ್ದರು, ಆದರೆ ವಿಧಿಯ ಆಟವೆ ಬೇರೆಯಾಗಿತ್ತು, ಆಸ್ಪತ್ರೆ ತಲುಪುವ ಮುನ್ನವೇ ಆನಂದಪ್ಪ ಕೊನೆಯುಸಿರೆಳೆದಿದ್ದರು.

ಇತ್ತ ಕಾರ್ಲಿ ವೀರಪ್ಪನವರ ಅಂತಿಮ ಸಂಸ್ಕಾರ ಇಂದು ಮಾನ್ಯರ ಮಸಲವಾಡ ಗ್ರಾಮದಲ್ಲಿ ನೆರವೇರಿಸಲಾಗಿದ್ದು ಎತ್ತಿನ ಮನಿ ಆನಂದಪ್ಪನವರ ಮೃತ ದೇಹ ಇನ್ನೂ ಗದಗ ಜಿಲ್ಲಾಸ್ಪತ್ರೆಯಲ್ಲಿ ಇದ್ದು, ನಾಳೆ ಸ್ವಗ್ರಾಮ ಮಾನ್ಯರ ಮಸಲವಾಡಕ್ಕೆ ಮೃತ ದೇಹ ತರಲಾಗುತ್ತೆ, ನಾಳೆ ಮದ್ಯಾಹ್ನ ಅಂತಿಮ ಸಂಸ್ಕಾರ ನೆರವೇರಲಿದೆ.  ಎತ್ತಿನ ಮನಿ ಆನಂದಪ್ಪ ಮತ್ತು ಕಾರ್ಲಿ ವೀರಪ್ಪ ಈ ಇಬ್ಬರು ಮೃದು ಸ್ವಭಾವದ ವ್ಯಕ್ತಿಗಳಾಗಿದ್ದು ಇಡೀ ಮಾನ್ಯರ ಮಸಲವಾಡ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಒಳ್ಳೆಯ ವ್ಯಕ್ತಿಗಳನ್ನ ದೇವರು ಇಷ್ಟು ಬೇಗ ಕರೆದುಕೊಳ್ಳಬಾರದಿತ್ತೆಂದು ಗ್ರಾಮದ ಜನಸಾಮಾನ್ಯರು ಮಮ್ಮಲ ಮರುಗಿದ್ದಾರೆ.