You are currently viewing ಮೆಕ್ಕೆಜೋಳ ತುಂಬಿದ ಲಾರಿಯಲ್ಲಿ ಅಡಗಿದ್ದ ಜವರಾಯ ಮೂರು ಜೀವ ಬಲಿಪಡೆದ.

ಮೆಕ್ಕೆಜೋಳ ತುಂಬಿದ ಲಾರಿಯಲ್ಲಿ ಅಡಗಿದ್ದ ಜವರಾಯ ಮೂರು ಜೀವ ಬಲಿಪಡೆದ.

ಹಾವೇರಿ….ಮೆಕ್ಕೆಜೋಳ ತುಂಬುದ ಲಾರಿ ಉರುಳಿದ ಪರಿಣಾಮ ಲಾರಿಯಲ್ಲಿದ್ದ ಮೂರು ಜನ ಹಮಾಲರು ಉಸಿರುಗಟ್ಟಿ ಸಾವನ್ನಪ್ಪಿರುವ
ಘಟನೆ ಹಾವೇರಿ ತಾಲೂಕಿನ ಹೋಸರಿತ್ತಿ ಗ್ರಾಮದ ಬಳಿ ನಡೆದಿದೆ. ಆನಂದ -35ವರ್ಷ, ಮಂಜು-37ವರ್ಷ, ಆನಂದ- 33ವರ್ಷ ಮೃತ ದುರ್ದೈವಿಗಳಾಗಿದ್ದಾರೆ.ಇಚ್ಚಂಗಿ ಗ್ರಾಮದಿಂದ ಹೋಸರಿತ್ತಿ ಗ್ರಾಮಕ್ಕೆ ತೇರಳುವ ವೇಳೆ ನಡೆದ ಘಟನೆ ನಡೆದಿದ್ದು,ಸಾವನ್ನಪ್ಪಿರುವ ಎಲ್ಲರೂ ಇಚ್ಚೆಂಗಿ ಗ್ರಾಮದವರಾಗಿದ್ದಾರೆ.

ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆಬೇಟಿ ನೀಡಿ ಪರಿಸೀಲನೆ ನಡೆಸಿ,ಲಾರಿಯ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಮೃತ ದೇಹಗಳನ್ನ ಜೆಸಿಬಿ ಸಹಾಯದಿಂದ ಹೊರ ತೆಗೆಯಲಾಗಿದೆ. ಇಚ್ಚೆಂಗಿ ಗ್ರಾಮದ ರೈತರು ಬೆಳೆದಿದ್ದ ಮೆಕ್ಕೆಜೋಳವನ್ನ ಲಾರಿಯಲ್ಲಿ ತುಂಬಿಕೊಂಡು ಹೊಸರಿತ್ತಿ ಗ್ರಾಮಕ್ಕೆ ಸಾಗಾಟಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಏಕಾ ಏಕಿ ಉರುಳಿದೆ.

ಈ ಸಂದರ್ಭದಲ್ಲಿ ಲಾರಿಯ ಮೇಲೆ ಇದ್ದ ಹಮಾಲರು ಲಾರಿಯಲ್ಲಿ ತುಂಬಿದ ಚೀಲದ ಕೆಳಗಡೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ,ಘಟನಾ ಸ್ಥಳದಲ್ಲಿ ಇದ್ದ ಸ್ಥಳೀಯರು ಎಷ್ಟೇಪ್ರಯತ್ನಮಾಡಿ ಜೀವ ಉಳಿಸಲು ಹೋರಾಡಿದರೂ ಅವರ ಪ್ರಯತ್ನ ಫಲ ನೀಡಲಿಲ್ಲ.

ವರದಿ..ಸುಬಾನಿ ಪಿಂಜಾರ ವಿಜಯನಗರ.