You are currently viewing ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ತೆರಳಿದ ಕೆ.ಸಿ.ಕೆ.

ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ತೆರಳಿದ ಕೆ.ಸಿ.ಕೆ.

ವಿಜಯನಗರ…ಮಾಜಿ ವಿಧನಾ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರಿಗೆ ಹೃದಯಾಘಾತವಾಗಿದೆ. ಇಂದು‌ ಮದ್ಯಾಹ್ನ 12:30ರ ಸುಮಾರಿಗೆ ಬಳ್ಳಾರಿಯ ಕಾಸ್ಮೊ ಕ್ಲಬ್ ನಲ್ಲಿ ಇದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದ ಸುಸ್ತಾದ ಕೆ.ಸಿ.ಕೆ.ಅವರು ಮನೆಗೆ ತೆರಳಿ ಬಳ್ಳಾರಿಯ ವೈದ್ಯ ಬಿ.ಕೆ.ಸುಂದರ್ ಅವರಿಗೆ ಮಾಹಿತಿ ನೀಡಿ ಮನೆಗೆ ಕರೆಯಿಸಿಕೊಂಡು ಪರೀಕ್ಷೆಗೆ ಒಳಪಟ್ಟಿದ್ದಾರೆ.

ಹೃದಯಾಘಾತ ಆಗಿರುವ ಲಕ್ಷಣಗಳು ಪಕ್ಕಾ ಆಗುತಿದ್ದಂತೆ ತಡಮಾಡದ ವೈಧ್ಯ ಬಿ.ಕೆ.ಸುಂದರ್ ಅವರು ತಮ್ಮ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದ್ದಾರೆ,  ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸಿಪಾರಸ್ಸುಮಾಡಿ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ವೈಧ್ಯರ ಸಲಹೆಯಂತೆ ಕೆ.ಸಿ.ಕೆ.ಅವರನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಇಂದು ಸಂಜೆ 4:15ರ ಸುಮಾರಿಗೆ ಬಳ್ಳಾರಿಯಿಂದ ಬೆಂಗಳೂರು ಕಡೆ ಹೊರಟಿರುವ ಕೆ.ಸಿ.ಕೆ.ಅವರ ಕಾರು ಸಂಜೆ ಏಳು ಗಂಟೆಯಷ್ಟೊತ್ತಿಗೆ ಬೆಂಗಳೂರಿನ ಆಸ್ಪತ್ರೆಗೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ, ಯಾರು ಭಯ ಪಡುವ ಅವಶ್ಯಕತೆ ಇಲ್ಲ ಜೀವಕ್ಕೆ ಯಾವುದೇ ತೊಂದರೆ ಆಗುವಂತ ಲಕ್ಷಣಗಳಿಲ್ಲ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ ಹಿನ್ನೆಲೆಯಲ್ಲಿ ನಿಘಾವಹಿಸುವ ಸಂಭಂದ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರ ಆಪ್ತರು ಹಂಪಿ ಮಿರರ್ ಜೊತೆ ಮಾತನಾಡಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ