You are currently viewing ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ. ಆಸ್ತಿ ವೈಶಮ್ಯ ತಮ್ಮನನ್ನೇ ಕೊಚ್ಚಿ ಕೊಲೆಮಾಡಿದ ಅಣ್ಣ.

ದಾಯಾದಿ ಕಲಹ ಕೊಲೆಯಲ್ಲಿ ಅಂತ್ಯ. ಆಸ್ತಿ ವೈಶಮ್ಯ ತಮ್ಮನನ್ನೇ ಕೊಚ್ಚಿ ಕೊಲೆಮಾಡಿದ ಅಣ್ಣ.

ವಿಜಯನಗರ..ಆಸ್ತಿಯ ಹಳೆಯ ವೈಶಮ್ಯ ಹಿನ್ನೆಲೆಯಲ್ಲಿ ತಮ್ಮನನ್ನೇ ಕುಡುಗೊಲಿನಿಂದ ಕೊಚ್ಚಿ ಕೊಲೆಮಾಡಿದ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯ ತಾಲೂಕಿನ ಕೊಂಡೇನಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಭರಮಪ್ಪ 66ವರ್ಷ ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಉಲವತ್ತಿ ಸೋಮಪ್ಪ ಕೊಲೆ ಆರೋಪ ಹೊತ್ತಿರುವ ತಮ್ಮನಾಗಿದ್ದಾನೆ. ಭರಮಪ್ಪ ಮತ್ತು ಸೋಮಪ್ಪ ಇಬ್ಬರು ಅಣ್ಣ ತಮ್ಮಂದಿರಾಗಿದ್ದು, ಕಳೆದ ಎರಡು ವರ್ಷಗಳಿಂದ ಇವರಿಬ್ಬರ ಮದ್ಯ ಆಸ್ತಿ ವೈಶಮ್ಯ ಪ್ರಾರಂಭವಾಗಿ ಎರಡು ಕುಟುಂಭದ ಮದ್ಯ ಜಗಳ ಮುಂದುವರೆದಿತ್ತು, ಇದೇ ವಿಚಾರವಾಗಿ ಇಬ್ಬರ ಮದ್ಯ ಜಗಳ ನಡೆದಿದ್ದು, ಇದೇ ಪ್ರಕರಣ ನ್ಯಾಯಾಲಯದಲ್ಲಿ ಮುಂದುವರೆದಿತ್ತು,

ಆದರೆ ಪ್ರಕರಣ ಇತ್ಯಾರ್ಥ ಆಗುವ ಮುಂಚೆಯೇ ಭರಮಪ್ಪನ ಕೊಲೆಮಾಡಿದ ಸೋಮಪ್ಪ ಜೈಲು ಸೇರಿದ್ದಾನೆ, ಇನ್ನು ನಿನ್ನೆ ಕೊಂಡೇನಹಳ್ಳಿ ಗ್ರಾಮದ ಚೌಡಮ್ಮ ದೇವಿಯ ಜಾತ್ರೆ ಗ್ರಾಮದಲ್ಲಿ ನಡೆದಿತ್ತು,(19/04/22) ಊರಿನ ಆಂಜನೇಸ್ವಾಮಿ ದೇವಸ್ಥಾನದ ಮುಂಬಾಗದ ಕರುಗಲ್ಲು ಬಳಿಯಲ್ಲಿ ಭರಮಪ್ಪ ಬರುತಿದ್ದಂತೆ ಸೋಮಪ್ಪ  ಕೊಡುಗೋಲಿನಿಂದ ಕೊಚ್ಚಿ ಕೊಲೆಮಾಡಿದ್ದಾನೆ ಎಂದು ಮೃತನ ಸಂಭಂದಿಗಳು ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷಯ ತಿಳಿಯುತಿದ್ದಂತೆ ತಂಬ್ರಳ್ಳಿ ಪಿ.ಎಸ್.ಐ. ಮತ್ತು ಹಗರಿಬೊಮ್ಮನಹಳ್ಳಿಯ ಸಿ.ಪಿ.ಐ ಸ್ಥಳಕ್ಕೆ ಬೇಟಿ ನೀಡಿ ಪರಿಸೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  ಇನ್ನು ತನಿಖೆ ಕೈಗೆತ್ತಿಕೊಂಡ ತಂಬ್ರಳ್ಳಿ ಪೊಲೀಸರು ತಲೆ ಮರೆಸಿಕೊಂಡಿರುವ ಕೊಲೆ ಆರೋಪಿ ಸೋಮಪ್ಪನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಹಿರಿಯರು ಕಷ್ಟಪಟ್ಟು ಸಂಪಾದನೆಮಾಡಿದ ಆಸ್ತಿಯನ್ನ ಹೊಂದಾಣಿಕೆಯಿಂದ ಅಂಚಿಕೊಂಡು ಅನುಭವಿಸದೆ ಒಬ್ಬ ಮಸಣ ಸೇರಿದರೆ ಮತ್ತೊಬ್ಬ ಜೈಲುಪಾಲಾಗಿದ್ದಾನೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.