![](https://hampimirror.com/media/2022/01/IMG-20220127-WA0199-1024x683.jpg)
ಬಳ್ಳಾರಿ…ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ,ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಜತೆಗೂಡಿ ಗುರುವಾರ ಬಳ್ಳಾರಿ ನಗರ ಪ್ರದಕ್ಷಿಣೆ ಮಾಡಿದರು.
ನಗರದ ಹೊಸಬಸ್ ನಿಲ್ದಾಣ, ಗಡಗಿ ಚನ್ನಪ್ಪವೃತ್ತ, ಬೆಂಗಳೂರು ರಸ್ತೆ, ತೇರುಬೀದಿ, ಸಣ್ಣ ಮಾರುಕಟ್ಟೆ, ಮೀನಾಕ್ಷಿ ಸರ್ಕಲ್, ಮೋತಿ ಸರ್ಕಲ್, ಎಪಿಎಂಸಿ ರಾಡಾರ್,ಬೆಂಕಿ ಮಾರಮ್ಮ ಗುಡಿ ಸರ್ಕಲ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
![](https://hampimirror.com/media/2022/01/IMG-20220127-WA0198-1024x683.jpg)
ಪುಟ್ಪಾತ್ ಸಮಸ್ಯೆ, ರಸ್ತೆ ಒತ್ತುವರಿ, ವ್ಯಾಪಾರಿಗಳ ಅಹವಾಲು ಸೇರಿದಂತೆ ಇನ್ನೀತರ ಸಮಸ್ಯೆಗಳನ್ನು ಪರಿಶೀಲಿಸಿದರು.
![](https://hampimirror.com/media/2022/01/IMG-20220127-WA0210-1024x683.jpg)