You are currently viewing ನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ನಾವು ಪೊಲೀಸರೆಂದು ಎಚ್ಚರಿಸಿ, ಚಿನ್ನದ ಸರ ಎಗರಿಸಿ ಪರಾರಿಯಾದ ಖದೀಮರು.

ವಿಜಯನಗರ.. ಹೊಸಪೇಟೆ ನಗರದ ಟಿ.ಬಿ.ಡ್ಯಾಂ ರಸ್ತೆಯಲ್ಲಿ ಅರವತ್ತರ ಆಸುಪಾಸಿನ ಜಯಲಕ್ಷ್ಮಿ ಎಂಬ ಮಹಿಳೆಯನ್ನ ವಂಚಿಸಿರುವ ಇಬ್ಬರು ಸರಗಳ್ಳರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ.

ಹೊಸಪೇಟೆ ನಗರದಿಂದ ಟಿ.ಬಿ.ಡ್ಯಾಂ. ಪ್ರದೇಶದಲ್ಲಿರುವ‌ ಮನೆಗೆ ಜಯಲಕ್ಷ್ಮಿ ತೆರಳುತ್ತಿರುವಾಗ ಮೊಟರ್ ಬೈಕಲ್ಲಿ ಬಂದ ಇಬ್ಬರು ಸರಗಳ್ಳರು ನಗರದ ಎಂ.ಎಸ್ಪಿ.ಪಿ.ಎಲ್‌. ಕಛೇರಿ ಬಳಿಯನಲ್ಲಿ ಮಹಿಳೆಯನ್ನ ತಡೆದು ಎನಮ್ಮ ನೀವು ಮೈಮೇಲೆ ಚಿನ್ನದ ಸರವನ್ನ ಹೀಗೆ ಹಾಕಿಕೊಂಡು ರಸ್ತೆಯಲ್ಲಿ ಹೋಗುತಿದ್ದೀರಿ‌,  ಕಳ್ಳರ ಹಾವಳಿ ಈ ಬಾಗದಲ್ಲಿ ಹೆಚ್ಚಿದೆ,  ಸರವನ್ನ ಹೀಗೆ ಹಾಕಿ ಕೊಂಡು ಹೋಗ ಬೇಡಿ ಬಿಚ್ಚಿ ನಿಮ್ಮ ಬ್ಯಾಗಲ್ಲಿ ಇಟ್ಟುಕೊಂಡು ಹೋಗಿ ಎಂದು ಹೇಳಿದ ವಂಚಕರು.

ನಾವು ಆಂದ್ರ ಪೊಲೀಸರು ಎಂದು‌ ನಂಬಿಸಿ, ಬಂಗಾರದ ಚೈನನ್ನ ಬಿಚ್ಚಿ ಬ್ಯಾಗಲ್ಲಿ ಇಡಿಸಿ‌, ಬ್ಯಾಗಿನ ಜಿಪ್ ಸರಿಯಾಗಿ ಹಾಕಿದ್ದೀರೊ ಅಥವಾ ಇಲ್ಲವೊ ಒಂದು ಸಾರಿ ಚಕ್ಮಾಡುತ್ತೇವೆ ಎಂದು ಬ್ಯಾಗಲ್ಲಿದ್ದ ಚೈನ್ ಎಗರಿಸಿ ಪರಾರಿಯಾಗಿದ್ದಾರೆ. ಬೆಳಗ್ಗೆ 11:30ರ ಸುಮಾರಿಗೆ ಈ ಘಟನೆ ನಡೆದಿದ್ದು ಬಂಗಾರ ಕಳೆದುಕೊಂಡ ಮಹಿಳೆ ಟಿ.ಬಿ.ಡ್ಯಾಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸ ಖದೀಮರನ್ನ ಪತ್ತೆಹಚ್ಚುವಂತೆ ಮನವಿಮಾಡಿದ್ದಾರೆ. ಇತ್ತೀಚೆಗೆ ಇಂತಾ ನಯ ವಂಚಕರು ಹೊಸಪೇಟೆ ನಗರದಲ್ಲಿ ಹೆಚ್ಚಾಗುತಿದ್ದು ಅಂತವರ ಮಾತಿಗೆ ಹೊಸಪೇಟೆ ನಾಗರೀಕರು ಮರುಳಾಗಬಾರದೆಂಬುದು ನಮ್ಮ ಕೋರಿಕೆ..

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.