You are currently viewing ಸೂರ್ಯ್ಯನಿಲ್ಲದ ಕಾಮನ ಬಿಲ್ಲು ತುಂಗಭದ್ರ ಜಲಾಶಯದಲ್ಲಿ ಕಾಣುತ್ತೆ.

ಸೂರ್ಯ್ಯನಿಲ್ಲದ ಕಾಮನ ಬಿಲ್ಲು ತುಂಗಭದ್ರ ಜಲಾಶಯದಲ್ಲಿ ಕಾಣುತ್ತೆ.

ವಿಜಯನಗರ….ಮಲೆನಾಡಿನಲ್ಲಿ ನಿರಂತಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೊಸಪೇಟೆ ಬಳಿಯಿರುವ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ, ಇದೀಗ ಜಲಾಶಯ ಭರ್ಥಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನ ಹರಿ ಬಿಡಲಾಗಿದೆ, ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 1633 ಅಡಿಗಳಷ್ಟಾಗಿದ್ದು ಇದೀಗ 1631 ಅಡಿಗೆ ನೀರಿನ ಮಟ್ಟ ತಲುಪಿದೆ, 

ಅದಲ್ಲದೆ 93 ಸಾವಿರ್ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಇನ್ನೂ ಹರಿದು ಬರುತ್ತಿದೆ. ಹಾಗಾಗಿ ಇಂದು ಡ್ಯಾಂ ನ ಹತ್ತು ಕ್ರಷ್ಟ್ ಗೇಟ್ ಮುಕಾಂತ್ರ 43 ಸಾವಿರ್ ಕ್ಯೂಸೆಕ್ಸ್ ನೀರನ್ನ ನದಿಗೆ ಹರಿ ಬಿಡಲಾಗಿದೆ, 105:788 ಟಿ.ಎಂ.ಸಿ ನೀರು ಸಂಗ್ರಹಣ ಸಾಮರ್ಥ್ಯದ ಜಲಾಶಯದಲ್ಲಿ 98 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು ನಾಳೆ ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಜಲಾಶಯಕ್ಕೆ ಭಾಗೀನ ಅರ್ಪಿಸಲಿದ್ದಾರೆ. ಇನ್ನು ಹೀಗೆ ಜಲಾಶದಿಂದ ಹರಿಯುವ ನೀರಿಗೆ ತುಂಗಭದ್ರ ಆಡಳಿತ ಮಂಡಳಿ ಕಲರ್ ಪುಲ್ ಟಚ್ ನೀಡಿವ ಮುಕಾಂತ್ರ ಪ್ರವಾಸಿಗರನ್ನ ಆಕರ್ಸಿಸಲು ಮುಂದಾಗಿದೆ, 

ಜಲಾಶಯಕ್ಕೆ 33 ಕ್ರಸ್ಟಗೇಟ್ಗಳಿದ್ದು ಪ್ರತಿಯೂಂದು ಕ್ರಷ್ಟ್ ಗೇಟ್ಗೆ ಬಣ್ಣ ಬಣ್ಣದ ದೀಪಗಳನ್ನ ಅಳವಡಿಸುವ ಮುಕಾಂತ್ರ ಕೃತಕ ಕಾಮನ ಬಿಲ್ಲನ್ನ ನಿರ್ಮಾಣಮಾಡಿದ್ದಾರೆ, ಹಾಗಾಗಿ ಜಲಾಶಯವನ್ನ ಹಗಲು ಹೊತ್ತಿನಲ್ಲಿ ನೊಡುವುದಕ್ಕಿಂತ ರಾತ್ರಿಯ ಬಣ್ಣ ಬಣ್ಣದ ಬೆಳಕಿನಲ್ಲಿ ಹರಿಯುವ ನೀರನ್ನ ನೋಡುವುದೇ ಚಂದ ಎನ್ನುವಂತೆಮಾಡಿದ್ದಾರೆ, ಸದ್ಯಕ್ಕೆ ತುಂಗಭದ್ರ ಜಲಾಶಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ತೆರೆಯಿರಿ

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ