You are currently viewing ಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ

ಆಟ ಆಡುವ ಬಾಲಕನನ್ನೂ ಬಿಡಲಿಲ್ಲ ಸಿಡಿಲು.ವಿಜಯನಗರ ಜಿಲ್ಲೆಯಲ್ಲಿ ಎರಡನೆ ದಿನವೂ ಮುಂದುವರೆದ ಸಿಡಿಲಿನ ಸಾವಿನ ಆರ್ಭಟ

ವಿಜಯನಗರ…ನಿನ್ನ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸಿಡಿಲ ಬಡಿತಕ್ಕೆ ರೈತ ಸಾವನ್ನಪ್ಪುವ ಸುದ್ದಿ ಮರೆಮಾಚುವ ಮುನ್ನವೇ ಇಂದು ಕೂಡ ಸಿಡಿಲಾರ್ಭಟ ತನ್ನ ದಾಳಿಯನ್ನ ಮುಂದುವರೆಸಿದೆ. ಇಂದು ಹಗರಿಬೊಮ್ಮನಹಳ್ಳಿ ಪುರಸಭೆ ವ್ಯಾಪ್ತಿಯ ಚಿಂತ್ರಪಳ್ಳಿಯಲ್ಲಿ ಸಿಡಿಲು ಅಘಾತಕ್ಕೆ ಓರ್ವ ಬಾಲಕ ಮೃತಪಟ್ಟಿರುವ ದುರ್ಘಟನೆ ನಡೆದಿದೆ.

ಚಿಂತ್ರಪಳ್ಳಿಯಲ್ಲಿ 5 ನೇ ತರಗತಿ ವಿದ್ಯಾರ್ಥಿ ಸಿ.ನಾಗರಾಜ್ 11ವರ್ಷ ಸಾವಿಗೀಡಾದ ದುರ್ದೈವಿ ಬಾಲಕನಾಗಿದ್ದು, ಚಿಂತ್ರಪಳ್ಳಿ ಹೊರವಲಯದಲ್ಲಿ ಆಟವಾಡಿ ಮನೆಗೆ ಬರುತ್ತಿದ್ದ ವೇಳೆ ಸಿಡಿಲು ಬಡಿತಕ್ಕೆ ಅಘಾತಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಂದೆ ಮಂಜುನಾಥ ತಾಯಿ ಕಮಲಮ್ಮರಿಗೆ ಎರಡನೇ ಮಗನಾಗಿದ್ದ ಸಿ.ನಾಗರಾಜ್ ಸಾವಿನಿಂದ ಕುಟುಂಬದ ಸದಸ್ಯರು ತಲ್ಲಣಗೊಂಡಿದ್ದಾರೆ.

ಹಗರಿಬೊಮ್ಮನಹಳ್ಳಿ ಪಟ್ಟಣದ ನೂರು ಹಾಸಿಗೆ ಆಸ್ಪತ್ರೆಗೆ ಮೃತ ದೇಹವನ್ನು ತಂದು ಮರಣೋತ್ತರ ಪರೀಕ್ಷೆ ನಡೆಸಿ ಹಗರಿಬೊಮ್ಮನಹಳ್ಳಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತ ನಾಗರಾಜನನ್ನ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.