You are currently viewing ಹಸುಗೂಸಿನ ಅನ್ನಕ್ಕೆ ಖನ್ನ ಹಾಕಿದ ಕಾರ್ಯಕರ್ತೆಯರು.

ಹಸುಗೂಸಿನ ಅನ್ನಕ್ಕೆ ಖನ್ನ ಹಾಕಿದ ಕಾರ್ಯಕರ್ತೆಯರು.

ವಿಜಯಪುರ..ಅಂಗನವಾಡಿ ಆಹಾರಧಾನ್ಯವನ್ನ ಕದ್ದು ಮನೆಗೆ ಸಾಗಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನ ಗ್ರಾಮಸ್ಥರು ಹಿಡಿದು ಬುದ್ದಿ ಕಲಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಂಗಲಾ ಹಾಗೂ ಉಮ್ಮಕ್ಕ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆಯರಾಗಿದ್ದಾರೆ.

ಗರ್ಭಿಣಿ ಮಹಿಳೆಯರು, ಚಿಕ್ಕಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ ಕಿಟ್ ಗಳನ್ನ ಮನೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ತಕ್ಕಪಾಠ ಕಲಿಸಿ ಅಂಗನವಾಡಿಯ ಒಳಗಡೆ ಆಹಾರ ಧಾನ್ಯವನ್ನ ಇಡಿಸಿದ್ದಾರೆ.

ಈ ಸಂದರ್ಭದಲ್ಲಿ ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು ಇಂತಾ ಅಂಗನವಾಡಿ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.