ವಿಜಯಪುರ..ಅಂಗನವಾಡಿ ಆಹಾರಧಾನ್ಯವನ್ನ ಕದ್ದು ಮನೆಗೆ ಸಾಗಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನ ಗ್ರಾಮಸ್ಥರು ಹಿಡಿದು ಬುದ್ದಿ ಕಲಿಸಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
![](https://hampimirror.com/media/2022/01/IMG_20220114_175248-1024x564.jpg)
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಿಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಂಗಲಾ ಹಾಗೂ ಉಮ್ಮಕ್ಕ ಗ್ರಾಮಸ್ಥರ ಕೈಯಲ್ಲಿ ಸಿಕ್ಕಿಬಿದ್ದ ಅಂಗನವಾಡಿ ಕಾರ್ಯಕರ್ತೆಯರಾಗಿದ್ದಾರೆ.
![](https://hampimirror.com/media/2022/01/img_20220114_1752201542557409766064394-1024x555.jpg)
ಗರ್ಭಿಣಿ ಮಹಿಳೆಯರು, ಚಿಕ್ಕಮಕ್ಕಳಿಗೆ ವಿತರಿಸುವ ಪೌಷ್ಠಿಕ ಆಹಾರ ಕಿಟ್ ಗಳನ್ನ ಮನೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಅಂಗನವಾಡಿ ಕಾರ್ಯಕರ್ತೆಯರಿಗೆ ತಕ್ಕಪಾಠ ಕಲಿಸಿ ಅಂಗನವಾಡಿಯ ಒಳಗಡೆ ಆಹಾರ ಧಾನ್ಯವನ್ನ ಇಡಿಸಿದ್ದಾರೆ.
![](https://hampimirror.com/media/2022/01/screenshot_20220114_1751237670063346716122029.jpg)
ಈ ಸಂದರ್ಭದಲ್ಲಿ ಆಕ್ರೋಶ ಹೊರ ಹಾಕಿದ ಗ್ರಾಮಸ್ಥರು ಇಂತಾ ಅಂಗನವಾಡಿ ಕಾರ್ಯಕರ್ತರ ವಿರುದ್ದ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.