ಕೊಪ್ಪಳ..ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಕೊರೊನ ಮಹಾಮಾರಿ ಅಡ್ಡಿಯುಂಟುಮಾಡಿದೆ. ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ದಿ ಪಡೆದ ಗವಿಮಠದ ಜಾತ್ರೆ ನಡೆಸುವ ಸಂಭಂದ ಸಕಲ ಸಿದ್ಧತೆಯನ್ನಮಾಡಿಕೊಂಡಿತ್ತು ಆಡಳಿತ ಮಂಡಳಿ.
![](https://hampimirror.com/media/2022/01/IMG_20220114_181027.jpg)
ಆದರೆ ಕೊವಿಡ್ ಹೆಚ್ಚಾದ ಹಿನ್ನೆಲೆಯಲ್ಲಿ ಮಠದ ಆಡಳಿತ ಮಂಡಳಿ ಜಾತ್ರೆಯನ್ನ ಸ್ಥಗಿತಮಾಡಿರುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.ಶತಮಾನಗಳಿಂದ ಲಕ್ಷಾಂತರ ಭಕ್ತರು ಸೇರುವ ಶ್ರೀ ಗವಿಸಿದ್ದೇಶ್ವರ ಜಾತ್ರೆ ಇದಾಗಿದ್ದು.ಓಮಿಕ್ರಾನ್ ಹಿನ್ನೆಲೆಯಲ್ಲಿ ಜಾತ್ರಮಹೋತ್ಸವ ರದ್ದು ನಿರ್ಧಾರಕ್ಕೆ ಆಡಳಿತ ಮಂಡಳಿ ಮುಂದಾಗಿದೆ.
![](https://hampimirror.com/media/2022/01/image_editor_output_image-2033274349-1642164881824.jpg)
ಸಂಪ್ರದಾಯ ಸರಳವಾಗಿ ಕೇವಲ ಶ್ರೀಮಠದ ಆವರಣದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಣೆಮಾಡಿ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನ ಸ್ಥಗಿತಗೊಳಿಸಲಾಗಿದೆ.
ವರದಿ..ಸುಬಾನಿ ಪಿಂಜಾರ.
![](https://hampimirror.com/media/2022/01/IMG_20220114_181041.jpg)