You are currently viewing ಮಹಾ ಗಣಪತಿ ವಿಸರ್ಜನೆ ವೇಳೆ ಅವಘಡ ಒಂದು ಸಾವು.

ಮಹಾ ಗಣಪತಿ ವಿಸರ್ಜನೆ ವೇಳೆ ಅವಘಡ ಒಂದು ಸಾವು.

ವಿಜಯನಗರ (ಹೊಸಪೇಟೆ) ಗಣಪತಿ ವಿಸರ್ಜನೆ ವೇಳೆ, ಮೂರ್ತಿ ಸಮೇತ ಕ್ರೇನ್ ಪಲ್ಟಿಯಾಗಿ ಕಾಲುವೆಗೆ ಉರುಳಿದ ಪರಿಣಾಮ ಓರ್ವ ಸಾವನ್ನಪ್ಪಿ ಮತ್ತೊರ್ವ ವ್ಯಕ್ತಿಗೆ ಗಂಬೀರ ಗಾಯವಾದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಟಿ.ಬಿ.ಡ್ಯಾಂ ಪ್ರದೇಶದಲ್ಲಿ ನಡೆದಿದೆ.

ಮೃತಪಟ್ಟ ಯುವಕ ಮತ್ತು ಗಾಯಾಳು ಟಿಬಿ ಡ್ಯಾಂ ನ ಇವಿ ಕ್ಯಾಂಪ್ ನಿವಾಸಿಗಳು 

ಟಿ.ಬಿ. ಡ್ಯಾಂ ನ ಇ.ವಿ. ಕ್ಯಾಂಪ್ ನಿವಾಸಿ ಅಶೋಕ್  (18) ಸಾವಿಗೀಡಾದ ಯುವಕನಾಗಿದ್ದು, ಸಾಯಿ ನಿಖಿಲ್ ಗಂಭೀರ, ಗಾಯಾಳುವಾಗಿದ್ದು ಈತನನ್ನ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊಸಪೇಟೆ ನಗರದ ಹೊರ ವಲಯದ ಟಿಬಿ ಡ್ಯಾಂ ಕಾಲುವೆಯಲ್ಲಿ  ಮದ್ಯರಾತ್ರಿ 1.25 ರ ಸುಮಾರಿಗೆ ಘಟನೆ ನಡೆದಿದ್ದು,  ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಂದು ಗಂಟೆ ನಿರಂತರ ಕಾರ್ಯಾಚರಣೆ ನಡೆಸಿ ಕ್ರೇನ್ ನಿಂದ ಮೃತದೇಹ ಮತ್ತು ಗಾಯಾಳನ್ನು ಹೊರತೆಗೆದರು, 

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ , ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಸ್ಥಳದಲ್ಲಿ ಇದ್ದರು,ಇನ್ನು ಈ ಘಟನೆ ಕುರಿತು  

 ಮಹಾ ಗಣಪತಿ ಮಂಡಳಿಯ ಮುಖ್ಯಸ್ಥ ನೂಕರಾಜ ಮತ್ತು ಕ್ರೇನ್ ಆಪರೇಟರ್ ವಿರುದ್ದ ಟಿ.ಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.